ಇರುವುದೆಲ್ಲವ ಬಿಟ್ಟು....
"ಏನೆಂದೂ ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ" ಮನುಷ್ಯನ ಬದುಕಿನಲ್ಲಿ ಆಸೆಯು ಎಂದಿಗೂ ನಿಲ್ಲದ ಒಂದು ನಿರಂತರ ಪ್ರಕ್ರಿಯೆ. ಈ ಬಗ್ಗೆ ಡಾ. ರಾಜಕುಮಾರ್ ಅವರು ಹಾಡಿರುವ ಮೇಲಿನ ಸಾಲುಗಳು ಅಕ್ಷರಸ: ಮನಮುಟ್ಟುವವುಗಳು. ಮನುಷ್ಯ ಯಾಕೆ ಹೀಗೆ?ಮನದಲ್ಲಿ ಚಿಗುರಿ ನಿಲ್ಲದೆ ಓಡುವ ಬಯಕೆಗಳ ಹಿಂಬಾಲಿಸಿ ಕೊನೆಗೆ ಬದುಕನ್ನು ಗೋಳಿನ ತಾಣವನ್ನಾಗಿಸಿ ಬದುಕೆಲ್ಲ ನೆಮ್ಮದಿಯ ಅರಸುವ ಮೂರ್ಖನಾಗುತ್ತಾನೆ. ಈ ಜಗತ್ತಿನಲ್ಲಿ ಸರ್ವ ಸುಖವನ್ನು ಅನುಭವಿಸಿ ಸಾಯುವಷ್ಟು ಆಯಸ್ಸು ಯಾರಿಗಿದೆ.? ಮನುಷ್ಯನ ಸೃಷ್ಟಿಯೇ ವಿಭಿನ್ನ.ಈ ಜಗದಲ್ಲಿ ಪ್ರತಿಯೊಬ್ಬನ ಬದುಕಿಗೂ ಒಂದು ಉದ್ದೇಶ ಇದೆ ನಿಜ. ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಕರ್ಮಗಳನ್ನು ಪೂರ್ತಿ ಮಾಡಲು ಭೂಮಿ ಮೇಲೆ ಜನ್ಮ ತಾಳುತ್ತಾನೆ ಅನ್ನುವ ನಂಬಿಕೆಯಿದೆ. ಹಾಗೆಯೇ ಇಲ್ಲಿ ಪ್ರತಿಯೊಬ್ಬನ ಪಾತ್ರವೂ ವಿಭಿನ್ನ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ ಬಹಳಷ್ಟು ಜನ ಬೇರೆಯವರನ್ನು ಅನುಕರಿಸಲು ಹೋಗಿ ತಮ್ಮ ಬದುಕಿನ ವಿಭಿನ್ನತೆಯನ್ನು ಕಳೆದುಕೊಂಡು ತಮ್ಮ ಬದುಕಿನ ಅಂದವನ್ನು ತಾವೇ ಕೆಡಿಸಿಕೊಳ್ಳುತ್ತಾರೆ. ಮನುಷ್ಯನ ಬದುಕು ಈ ಜಗತ್ತಿನಲ್ಲಿ "ವೖವವಿಧ್ಯತೆಯಲ್ಲಿ ಏಕತೆ"ಗೆ ಉತ್ತಮ ಉದಾಹರಣೆ. ಅದೆಷ್ಟು ವಿಶೇಷ ವೖಶಿಷ್ಟ್ಯ ಬದುಕಿನ ಕಥೆಗಳು ಈ ಜಗತ್ತಿನಲ್ಲಿ ಇಂದಿಗೂ ಅದ್ಬುತ ಪ್ರದರ್ಶನಗಳನ್ನು ನೀಡುತ್ತಿದೆ. ಈ ಜಗತ್ತಿನಲ್ಲಿ ಬದುಕುವ ಪ್ರತಿ ಸಾಮಾನ್ಯ ಮನುಷ್ಯನ ಬದುಕಿನಲ್ಲೂ ವಿಭಿನ್ನ ವಿಶೇಷ ...